:ದೇಶ ಮೊದಲು:
ದೇಶಕ್ಕಾಗಿ
ಪ್ರಾಣ ಕೊಡುತ್ತಿರುವ ಯೋಧರು ಒಂದೆಡೆಯಾದರೆ ದೇಶದ
ಮಾನಹರಣ ಮಾಡುತ್ತಿರುವವರು ಇನ್ನೊಂದೆಡೆ!
ದೇಶದಲ್ಲಾಗುತ್ತಿರುವ
ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ನಮ್ಮ ದೇಶ ಸ್ವಾತಂತ್ರವನ್ನು
ನಾವು ಸರಿಯಾಗಿ ಬಲಿಸಿಕೊಳ್ಳುತ್ತಿಲ್ಲ ಎನ್ನುವದು
ಸ್ಪಷ್ಟವಾಗಿ ತಿಳಿಯುತ್ತದೆ. ಜೆ.ಯೆನ್ ವಿಶ್ವವಿದ್ಯಾಲಯ(JNU) ದ
ವಿದ್ಯಾರ್ಥಿಗಳು "ಪಾಕಿಸ್ತಾನ ಜಿಂದಾಬಾದ್" ಎಂಬ ಘೋಷಣೆ ಕೂಗುತ್ತಿದ್ದುದ್ಡು
ನೋಡಿ ಒಂದು ನಿಮಿಷ ನಿಜವಾಗಿಯೂ
JNU ಭಾರತದ ವಿಶ್ವವಿದ್ಯಾಲಯವೋ ಅಥವಾ ಪಾಕಿಸ್ತಾನದ ವಿಶ್ವವಿದ್ಯಾಲಯವೋ ಎಂಬುದು ತಿಳಿಯದೇ ಹೋಯಿತು."ಅಫ್ಜಲ್ ಗುರು ಹುತಾತ್ಮ"
ಅಂತ ಘೋಷಣೆ ಕೂಗಿದ ಈ
ದೇಶವಿದ್ರೋಹಿ ವಿದ್ಯಾರ್ಥಿಗಳು ಭಾರತದ ಪಾರ್ಲಿಮೆಂಟಿನ ಮೇಲೆ
ದಾಳಿ ಮಾಡಿ ದೇಶಕ್ಕೆ ಕಪ್ಪುಚುಕ್ಕೆಯಾದ
ಉಗ್ರನನ್ನು ಬೆಂಬಲಿಸಿದ ಪರಿ ನೋಡಿ ನಿಜಕ್ಕೋ ಆಶ್ಚರ್ಯ
ವಾಗುತ್ತದೆ.
ನಿಜವಾಗಿಯೂ
ಈ ವಿದ್ಯಾರ್ಥಿಗಳು ಬಯಸುತ್ತಿರುವದಾದರೂ
ಏನು? ಇನ್ನೊಂದು ಪಾರ್ಲಿಮೆಂಟ್ ಮೇಲೆ ದಾಳಿ? ಇಲ್ಲ
ಎನ್ನುವದಾದರೆ, ಈ ವಿದ್ಯಾರ್ಥಿಗಳು ಘಂಟ
ಘೋಷವಾಗಿ ಹೇಳುತ್ತಿರುವ "ಅಫ್ಜಲ್ ಗುರು ನಿನ್ನ
ಆಸೆ ನಾವು ಈಡೇರಿಸುತ್ತೇವೆ, ಭಾರತ
ಛಿದ್ರಗೊಳ್ಳುವತನಕ ನಾವು ಹೋರಾಟ ಮಾಡುತ್ತೇವೆ!!
ಈ ವಿದ್ಯಾರ್ಥಿಗಳಿಗೆ ಅಫ್ಜಲ್
ಗುರು ನಿಜವಾಗಿಯೂ ಗುರು? ಈ ವಿದ್ಯಾರ್ಥಿಗಳು
ದಿಕ್ಕುತಪ್ಪಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಈ
ವಿದ್ಯಾರ್ಥಿಗಳ ಪ್ರಕಾರ ಅಫ್ಜಲ್
ಗುರು ಗಲ್ಲಿಗೇರಿಸಿದ್ದು ಮಾನವೀಯತೆ ಅಲ್ಲ ಅನ್ನುವದಾದರೆ, ಅಫ್ಜಲ್
ಗುರು ದಾಳಿಗೆ 8 ಪೊಲೀಸರು ಜೀವತೆತ್ತರು. ಈ
ಉಗ್ರನಿಗೆ ನಾವು ಮಾನವೀಯತೆ ಮೆರೆದು
ಜೀವ ಭಿಕ್ಷೆ ನೀಡಬೇಕಿತ್ತೆ? ಭಾರತದಲ್ಲಿ
ಯಡಪಂಕ್ತಿಯ ಜನರಿದ್ದಾರೆ. ಈ ಯಡಪಂಕ್ತಿಯ ಜನರನ್ನು
ಈ ವಿದ್ಯಾರ್ಥಿಗಳು ಬಲಿಸಿಕೊಳ್ಳುತ್ತಿದ್ದಾರೆ.
ಯಡಪಂಕ್ತಿಯ ಜನರು ಭಾರತದ ಸಂವಿಧಾನದಲ್ಲಿ
ನಂಬಿಕೆಯುಳ್ಳವರು ಆದರೆ ಈ ವಿದ್ಯಾರ್ಥಿಗಳು
ಯಡಪಂಕ್ತಿಯವರು ಎಂದು ಹೇಳಿಕೊಂಡು ದೇಶವಿರೋಧಿ
ಚಟುವಟಿಕೆನಡೆಸುತ್ತಿರುವದು ನಿಜಕ್ಕೂ ದೇಶಕ್ಕೆ ಮಾರಕವೇ
ಸರಿ.
ಈ
ಎಲ್ಲಾ ಘಟನೆಗಳು ಒಂದೆಡೆ ಆದರೆ,
ಈ ದೇಶದ್ರೋಹಿ ವಿದ್ಯಾರ್ಥಿಗಳನ್ನು
ಬೆಂಬಲಿಸಿ ಮಾತನಾಡುವ ದೇಶದ್ರೋಹಿ ಹಿತಚಿಂತಕರು ಮತ್ತು ಸ್ವಾರ್ಥಿ ರಾಜಕಾರಣಿಗಳು
ಇನ್ನೊಂದೆಡೆ. ದಲಿತರನ್ನು ಮುಂದಿಟ್ಟುಕೊಂಡು ದೊಂಬರಾಟ ಮಾಡಿ ವೋಟು
ಪಡೆಯುವ ಈ ರಾಜಕಾರಣಿಗಳಿಗೆ ನನ್ನ
ಧಿಕ್ಕಾರವಿರಲಿ. ನಮ್ಮ ದೇಶದಲ್ಲಿ ದಲಿತ
ಎನ್ನುವದು ತುಂಬಾ ಸೂಕ್ಷ್ಮವಾದ ಪದ.
ಇದನ್ನರಿತ ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ
ಬೇಯಿಸಿಕೊಳ್ಳಲು ಆಗಾಗ್ಗೆ ದಲಿತರನ್ನು ಬಳಿಸಿಕೊಳ್ಳುತ್ತಾರೆ. ವೋಟಿಗಾಗಿ ಏನೆಲ್ಲಾ ಮಾಡಲು ಈ
ರಾಜಕಾರಣಿಗಳು ಹೇಸುವದಿಲ್ಲ. ಜನರು ಈ ಸೂಕ್ಷ್ಮ
ವಿಚಾರವನ್ನು ನಾವು ಮೊದಲು ತಿಳಿದುಕೊಳ್ಳಬೇಕು..!
ಕೊನೆಯದಾಗಿ
ಒಂದು ಮಾತು, ಭಾರತಕ್ಕೆ ಉಗ್ರ
ನಾಯಕನ ಅವಶ್ಯಕತೆ ಇಲ್ಲ. ದೇಶ ಪ್ರೇಮಿಯ
/ ದೇಶ ಭಕ್ತನ ಅವಶ್ಯಕತೆ ಇದೆ.
ದೇಶ ಮೊದಲು ಎನ್ನುವ ವಿಚಾರಧಾರೆ
ಇರುವ ನಾಯಕರು ಬೇಕು.
ದೇಶದ ಅಭಿರುದ್ಧಿಯ ಬಗ್ಗೆ ಚಿಂತನೆ
ಇರುವ ನಾಯಕರು ಬೇಕು. ದೇಶಕ್ಕೆ
ಒಡೆದು ಆಳುವ ನೀತಿಯ ವಿಚಾರ ಹೊಂದಿರುವ ನಾಯಕರು ಬೇಕಿಲ್ಲ..
ಒಂದು ಮಾತು ಮಾತ್ರ
ನಿಜ ಈ ವಿದ್ಯಾರ್ಥಿಗಳು ದೇಶಕ್ಕೆ
ಮಾರಕ !!
-ಜೈಹಿಂದ್
MD Harish
I thought this would be one of those prejudiced articles supporting any of the political parties. Its not! Very good article.
ReplyDeleteThanks Priyanka :)
ReplyDeleteSuper harish. Keep it up
ReplyDeleteThoughtful !!!!
ReplyDeleteNICE ONE HARISH
ReplyDelete