ಹೌದು! ಅಂದು ಭಾರತಕ್ಕೆ ದೊಡ್ಡ ಆಘಾತ. ಅಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಎಮರ್ಜೆನ್ಸೀ ಜಾರಿಯಲ್ಲಿದೆ ಎಂದು ಆಕಾಶವಾಣಿಯಲ್ಲಿ ಹೇಳುತ್ತಿದ್ದಂತೆಯೇ ಎಲ್ಲಾ ಭಾರತೀಯರೂ ಒಂದು ನಿಮಿಷ ದಿಕ್ಕು ತೋಚದಂತಾಗಿತು. ಆಗ ತಾನೇ ಕಪಿಮುಷ್ಟಿಯಿಂದ ಭಾರತ ಹೊರಬರಲು ಇನ್ನೂ ಹೆಣಗುತ್ತಿತ್ತು ಹಳ್ಳಿಗಳಲ್ಲಿ ವಿದ್ಯುತ್ ಇರಲಿಲ್ಲ (ಈಗಲೂ ಕೆಲವು ಹಳ್ಳಿಗಳಲ್ಲಿ ಇಲ್ಲ! ಆ ಪ್ರಶ್ನೆ ಬೇರೆ) ವಿದ್ಯಾಭ್ಯಾಸದ ಕೊರತೆ ಸಂಚಾರಿ ವಾಹನಗಳ ಆಭಾವ, ಹೀಗೆ ಒಂದುದೊಡ್ಡ ಲಿಸ್ಟ್ ಬೆಳೆಯುತ್ತಾ ಹೋಗುತ್ತದೆ.
ನಾನು ಈ ಲೇಖನದಲ್ಲಿ ತುರ್ತು ಪರಸ್ಥಿತಿಯಿಂದಾದ ಭಾರತದ ಮೇಲಿನ ಪ್ರಭಾವ ಮತ್ತು ಕಾಂಗ್ರೆಸ್ ಗೆ ಇದರಿಂದಾದ ಹಿನ್ನೆಡೆ ಈ ಎರಡು ವಿಷಯವನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೆನೆ.